ಕನ್ನಡಲೋಕ

೧೦ ಮುಂದೆ› ಕೊನೆ»


ಈ ಗುಲಾಬಿಯು ನಿನಗಾಗಿ...
ಸಂಗ್ರಹ - ಶುಕ್ರವಾರ ೦೮:೫೨, ಮಾರ್ಚ್ ೧೨, ೨೦೧೦

ಚಿತ್ರ: ಮುಳ್ಳಿನ ಗುಲಾಬಿ
ಸಂಗೀತ: ಸತ್ಯಂ
ಹಿನ್ನಲೆ ಗಾಯನ:ಎಸ್.ಪಿ


ಈ ಗುಲಾಬಿಯು ನಿನಗಾಗಿ
ಇದು ಚೆಲ್ಲುವ ಪರಿಮಳ ನಿನಗಾಗಿ
ಈ ಹೂವಿನಂದ ಪ್ರೇಯಸಿ
ನಿನಗಾಗೆ ಕೇಳೆ ಪ್ರೇಯಸಿ
ನಿನಗಾಗೆ ಕೇಳೆ ಓ ರತಿ

ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ನನ್ನೀ ಕಣ್ಣಲಿ ಕಾತರವೇನು
ನಿನ್ನನು ಕಾಣುವ ಆತುರವೇನು
ಆತುರ ತರುವಾ ವೇದನೆಯೇನು
ಜೀವದ ಜೀವವು ಪ್ರಿಯತಮೆ ನೀನು

ಈ ಗುಲಾಬಿಯು ನಿನಗಾಗಿ...

ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು
ನೀರನು ತೊರೆದರೆ ಕಮಲಕೆ ಸಾವು
ಹೂವನು ಮರೆತರೆ ದುಂಬಿಗೆ ಸಾವು..
ಕಾಣದೆ ಹೋದರೆ ಅರೆಕ್ಷಣ ನಿನ್ನ
ಮರುಕ್ಷಣ ಪ್ರಿಯತಮೆ ನನ್ನ ಸಾವು

ಈ ಗುಲಾಬಿಯು ನಿನಗಾಗಿ...


ಗಣಕಿಂಡಿ - ೦೪೨ (ಮಾರ್ಚ್ ೦೮, ೨೦೧೦)
ಗಣಕಿಂಡಿ - ಶುಕ್ರವಾರ ೦೭:೧೨, ಮಾರ್ಚ್ ೧೨, ೨೦೧೦

ಅಂತರಜಾಲಾಡಿ ಜ್ವಾಲಾಮುಖಿಗೆ ಭೇಟಿ ನೀಡಿ ೨೦೧೦೨ ಚಲನಚಿತ್ರ ನೋಡಿರಬಹುದಲ್ಲವೇ? ಅದರಲ್ಲಿ ಭೂಕಂಪ, ಜ್ವಾಲಾಮುಖಿ ಎಲ್ಲ ಇತ್ತು. ಅವೆಲ್ಲ ಗಣಕ ಬಳಸಿ ಸೃಷ್ಠಿ ಮಾಡಿದಂತಹವು. ನಿಜವಾದ ಜ್ವಾಲಾಮುಖಿ ನೋಡುವುದು ಬಹಳ ಕಷ್ಟ. ಅದಕ್ಕಾಗಿ ನೀವು ವಿಶೇಷ ವಿಮಾನ ಅಥವಾ ಹೆಲಿಕಾಫ್ಟರಿನಲ್ಲಿ ಪ್ರಯಾಣ ಮಾಡಬೇಕು. ಆದೂ ಜ್ವಾಲಾಮುಖಿ ಜೀವಂತವಾಗಿದ್ದಾಗ. ಜ್ವಾಲಾಮುಖಿಗಳಿರುವಲ್ಲಿಗೆ ಪ್ರವಾಸ ಹೋಗಬೇಕೆ? ಪ್ರಪಂಚದ ಖ್ಯಾತ ಜ್ವಾಲಾಮುಖಿಗಳ ವಿವಿಧ ನೋಟಗಳ ಚಿತ್ರಣವನ್ನು ನೋಡಬೇಕೇ? ಹಾಗಿದ್ದರೆ ನೀವು ಭೇಟಿ 


ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು
ಸಿರಿಗನ್ನಡ ಸಂಪದ - ಶುಕ್ರವಾರ ೦೬:೦೯, ಮಾರ್ಚ್ ೧೨, ೨೦೧೦

ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?
ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ 'ಕೃತಿ' ಗಳನ್ನು ಖಂಡಿಸೋಣ.

 

ಮುಂದೆ ಓದಿ...


ದೇವರು
ಸಿರಿಗನ್ನಡ ಸಂಪದ - ಶುಕ್ರವಾರ ೦೪:೫೬, ಮಾರ್ಚ್ ೧೨, ೨೦೧೦

ಒಬ್ಬ ಮನುಷ್ಯ ಸಾಧುವಿನ ಬಳಿ ಹೋಗಿ ನಾನು ದೇವರನ್ನು ನಮ್ಬುವದಿಲ್ಲ ಎಂದ.  ನೀವು ನನಗೆ ದೇವರನ್ನು ತೋರಿಸಿದರೆ ನಂಬುವೆ ಎಂದ.

ಆಗ ಆ ಸಾಧು ಒಂದು ಪ್ರಶ್ನೆ ಮುಂದಿಟ್ಟರು.

ನಿನಗೆ ಎಷ್ಟು ಜನ ಪರಿಚಯ?

ಹ್ಮ... ಯೋಚನೆ ಮಾಡುತ್ತ ಸುಮಾರು ಒಂದು ೧೦೦೦೦ ಜನ ಎಂದ.

೧೦೦೦೦ ಜನಗಳ ಬಿಟ್ಟು ಬೇರೆ ಜನಗಳೇ ಗೊತ್ತಿಲ್ಲ ನಿನಗೆ. ಆದಿ ಕಾಲದಿಂದಲೂ ಕೋಟಿ ಕೋಟಿ ಜನ ನಂಬಿರುವ ದೇವರ ಬಗ್ಗೆ ಅನುಮಾನವಾ?... ಎಂದರು.

ಮತ್ತೊಂದು  ಪ್ರಶ್ನೆ ಮುಂದಿಟ್ಟರು.

ನಿನ್ನ ಇರುವಿಕೆ ಹೇಗೆ ಸಮರ್ಥಿಸುವೆ ಎಂದು.

ನಾನು ನಿಮ್ಮ ಜೊತೆ ಮಾತನಾಡುತ್ತಿರುವೇನಲ್ಲ ಎಂದ.

ನೀನು ಹೇಗೆ ಧರೆಗೆ ಬಂದೆ.

ನನ್ನ ತಂದೆ ಮತ್ತು ತಾಯಿಗಳಿಂದ.

ಹಾಗೆ ನಿನ್ನ ತಂದೆ ಇರುವಿಕೆ ಸಮರ್ಥಿಸು ಎಂದರು.

ನನ್ನ ಅಜ್ಜ ಮತ್ತು ಅಜ್ಜಿ ಎಂದ.

ಮತ್ತೆ ನಿಮ್ಮ ಅಜ್ಜನ ಇರುವಿಕೆ ಸಮರ್ಥಿಸು ಎಂದರು.

 

ಮುಂದೆ ಓದಿ...


ತೀರ್ಮಾನವಾಗದಿರುವ ಸರಿ ತಪ್ಪಿನ ಸರಣಿ
ಸಿರಿಗನ್ನಡ ಸಂಪದ - ಶುಕ್ರವಾರ ೦೪:೫೪, ಮಾರ್ಚ್ ೧೨, ೨೦೧೦

ಸಂಪದದಲ್ಲಿ 'ಇಲ್ಲಿ ಯಾರು ಸರಿ' ಎನ್ನುವ ಬರಹ ಉದ್ದೇಶಿಸಿ ಚರ್ಚೆಯ ಹೆಸರಿನಲ್ಲಿ ಮಾತಿನ ಕಚ್ಚಾಟ ಹಿಂಬಾಲಿಸುತ್ತಿರುವಾಗಲೆ ಆ ಕಡೆ ನಂಗೊಂದು ಮಿಂಚೆ ಬಂತು. ಅದನ್ನ ಹಾಗೆಯೆ ನಕಲಿಸಿ ಅಂಟಿಸುತ್ತಿದ್ದೇನೆ, ಚರ್ಚೆ(!!!) ಮಾಡುವವರಿಗೆ ಸಹಾಯ ಆಗಬಹುದು :) 

ಏನೆ ಹೇಳಿಪ್ಪ, ಆ ಬರಹದ ಹಿಂಬಾಲಿಸಿದಾಗ ತಿಳಿದಿದ್ದು, ದೇವ್ರು ದಿಂಡ್ರನ್ನ ಚಿತ್ರಿಸಕ್ಕೆ ಅಭಿವ್ಯಕ್ತ ಸ್ವಾತಂತ್ರ್ಯ್ ಇದೆ ಆದ್ರೆ ನಮ್ಗೆ ಸಂಬಂಧಪಟ್ಟವರನಲ್ಲ/ಇಷ್ಟಪಟ್ಟವರನಲ್ಲ.

ಖಜುರಾಹೊ ಅಲ್ಲಿ ನಗ್ನವಾಗಿರುವ ಶಿಲ್ಪಗಳು ಅಭಿಸಾರಿಕೆಯರದ್ದು ದೇವರದ್ದಲ್ಲ ಅಂದ್ರೆ ಈ ಮಾತನ್ನು ಜಾಣ ನಿರ್ಲಕ್ಶ್ಯ ಮಾಡಿ , ದೇವ್ರಿಗೆ ಬಟ್ಟೆ ಹೊಲೆದ ಟೈಲರ್ ಮಾಹಿತಿ ಕೊಡಿ ಅಂತ ವಿತಂಡವಾದ ಮಾಡೊರು.    

 

ಮುಂದೆ ಓದಿ...


ಇದು ನಮ್ಮ ಮನೆ
ಸಿರಿಗನ್ನಡ ಸಂಪದ - ಶುಕ್ರವಾರ ೦೪:೧೫, ಮಾರ್ಚ್ ೧೨, ೨೦೧೦

ಇದು ನಮ್ಮ ಮನೆ
ನಮ್ಮ ವಡ್ಡರ ಮನೆ
ನಾವು ಹುಟ್ಟಿದ ಮನೆ
ನಾವು ಆಡಿದ ಮನೆ
ಅಪ್ಪ ಅಮ್ಮನೊಡನೆ ಬಾಳಿದ ಮನೆ


ಅಲ್ಲಿಲ್ಲಿ ಗೆದ್ದಲು
ಕುಸಿದ ಗೋಡೆ
ಒಡಕಲು ಓಡು
ಮಳೆಗೆ ಸೋರುವ
ಗಾಳಿಗೆ ಹಾರುವ
ಹಂಚು ಪಕಾಸುಗಳು
ಆದರೂ ನಿಂತಿದೆ ಇನ್ನೂ
ತನ್ನ ಚರಿತ್ರೆಯೊಡನೆ
ಇದು ನಮ್ಮ ಮನೆ
ನಮ್ಮ ವಡ್ಡರ ಮನೆ


ಕೋಣೆ ಕೋಣೆಗು ಜನರು
ಅವರಿಗೆ ಅವರದೇ ಮಾತು
ಆದರೂ ನಾವೆಲ್ಲ ಒಂದೆ
ಕರುಳ ಬಳ್ಳಿಯ ಮುಂದೆ
ಇದು ನಮ್ಮ ಮನೆ
ನಮ್ಮ ನಿಮ್ಮ ಮನೆ


ನಮ್ಮ ಹುಟ್ಟಿಗೆ ಮುಂಚೆ ಇದ್ದ ಮನೆ
ಸಾವಿನ ಬಳಿಕ ಇರುವ ಮನೆ
ಎಲ್ಲದಕ್ಕೂ ಸಾಕ್ಷಿಯಾಗಿ
ಯುಗ ಯುಗಗಳನ್ನೇ ಕಳೆದ ಮನೆ
ನಾಯಿ ಬೆಕ್ಕುಗಳು ದನಕರುಗಳಿಗೆ
ಆಶ್ರಯವಾಗಿತ್ತು ಈ ಮನೆ
ಇದು ನಮ್ಮ ಮನೆ


ನಮ್ಮ ಪೂರ್ವಜರು ಪಾಲಿಸಿದ್ದರೊಂದು ಧರ್ಮ
ಅದರಂತೆ ಅವರ ಕರ್ಮ
ಹಾವು ನಾಗರನಾಗಿ
ಆನೆ ಗಣಪನಾಗಿ
ಹಂದಿ ವರಹನಾಗಿ
ಸಕಲ ಜೀವ ಜಂತುಗಳನ್ನೂ
ರಕ್ಷಿಸುತಿದ್ದ ನಮ್ಮ ಮನೆಯ ಧರ್ಮ
ಅದುವೇ ಸನಾತನ ಧರ್ಮ

 

ಮುಂದೆ ಓದಿ...


ಕಬ್ಬನ್ ಪಾರ್ಕಿನಲ್ಲಿ ಒಂದು ಸುಂದರ ಸಂಜೆಗೆ ಆಹ್ವಾನ.
ಸಿರಿಗನ್ನಡ ಸಂಪದ - ಶುಕ್ರವಾರ ೦೩:೦೬, ಮಾರ್ಚ್ ೧೨, ೨೦೧೦

ಆತ್ಮೀಯ ಸಂಪದಿಗರೆ,
ಸುಮಧುರ ಗೀತೆಗಳನ್ನು ಕೇಳುತ್ತಾ ಎಲ್ಲರ ಪರಿಚಯ ಮಾಡಿಕೊಳ್ಳುವ ಒಂದು ಸುಂದರ ಸಂಜೆಗೆ ನಿಮಗೆ ಆಹ್ವಾನ.

ಕಬ್ಬನ್ ಪಾರ್ಕಿನ ಬ್ಯಾಂಡ್ ಸ್ಟ್ಯಾಂಡಿನಲ್ಲಿ ಸುಂದರವಾದ ಕಾರ್ಯಕ್ರಮವೊಂದು ಇದೇ ಭಾನುವಾರ ನಡೆಯುತ್ತಿದೆ.  'ಪ್ರಕೃತಿ'  ತಂಡದವರು ಪ್ರತಿ ಭಾನುವಾರದ ಸಂಜೆ  ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿದ್ದಾರೆ.  ಈ ವಾರ ಜಯಂತ ಕಾಯ್ಕಿಣಿಯವರ  ಗೀತೆಗಳನ್ನು ಹಾಡಲಿದ್ದಾರೆ, ವಾಯ್ಸ್ ಆಫ್ ಬೆಂಗಳೂರು ಖ್ಯಾತಿಯ ಗಾಯಕರಾದ ವ್ಯಾಸರಾಜ್, ಸಂತೋಷ್, ಪೂಜಾರಾವ್ ಮತ್ತು ಸುವರ್ಣ ರಾಥೋಡ್.

ಅತಿಥಿಗಳಾಗಿ ವಾರ್ತಾ ಮತ್ತು ಪ್ರಸಾರ ಇಲಾಖೆಯ ನಿರ್ದೇಶಕರಾದ ವಿಷ್ಣುಕುಮಾರ್ ಹಾಗೂ ಕವಿ ಜಯಂತ ಕಾಯ್ಕಿಣಿ.

ಸಮಯ: ಸಂಜೆ ೫ ರಿಂದ ೭, ೧೪/೩/೨೦೧೦,

ದುಬೈನಿಂದ ಸ್ವಲ್ಪ ಜರೂರು ಕೆಲಸಕ್ಕಾಗಿ ಬಂದವನು ಮುಂದಿನ ವಾರ ಹಿಂತಿರುಗುತ್ತಿದ್ದೇನೆ.  ಸಿಗುವ ಅಲ್ಪ ಸಮಯದಲ್ಲಿ ಭೇಟಿಯಾಗೋಣ.  ಬರುವಿರಲ್ಲವೇ ?  ನನ್ನ ಮೊಬೈಲ್: ೯೬೨೦೯೩೬೫೭೬.

ಹೊಳೆ ನರಸಿಪುರ ಮಂಜನಾಥ.

 


ಡೆಕ್ಕನ್ ಹೆರಾಲ್ಡ್ -೧೧.೦೩.೨೦೧೦ ರ ಸಂಚಿಕೆ ಯಲ್ಲಿ...?
HaRiNi-GALLERY - ಶುಕ್ರವಾರ ೦೩:೦೧, ಮಾರ್ಚ್ ೧೨, ೨೦೧೦


ಪ್ರಕಾಶ್ ಹಾಗೂ ಸತೀಶ್ ಆಚಾರ್ಯ ಅವರ ಚಿತ್ರಗಳು
HaRiNi-GALLERY - ಶುಕ್ರವಾರ ೦೨:೫೭, ಮಾರ್ಚ್ ೧೨, ೨೦೧೦


ಸ್ಟೀವನ್ ರೇಗೊ...ಗ್ಲೋಬಲ್ ವಾರ್ಮ್ ಬಗ್ಗೆ ಒಳ್ಳೆಯ ಸ್ಟೋರಿ ನೀಡಿದ್ದಾರೆ ...ವಿಜಯ ಕರ್ನಾಟಕ ದಲ್ಲಿ
HaRiNi-GALLERY - ಶುಕ್ರವಾರ ೦೨:೪೭, ಮಾರ್ಚ್ ೧೨, ೨೦೧೦


ಪ್ರೆಸ್ ರಿಲೀಸ್
HaRiNi-GALLERY - ಶುಕ್ರವಾರ ೦೨:೪೨, ಮಾರ್ಚ್ ೧೨, ೨೦೧೦


ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?
ಸಿರಿಗನ್ನಡ ಸಂಪದ - ಶುಕ್ರವಾರ ೦೨:೪೧, ಮಾರ್ಚ್ ೧೨, ೨೦೧೦

ಅವನು - ಅವರು


ನೀನು - ನೀವು


ಮನುಜ


ಮನುಜರ


ನಡುವೀ


ಏಕವಚನ


ಬಹುವಚನಗಳ


ಗೊಂದಲವದೇಕೆ?


 


ಬಹುವಚನದಲೇ


ಗೌರವ


ಅಡಗಿಹುದಾದರೆ


ಆ ದೇವರಿಗೆ


ಅಗೌರವವದೇಕೆ?


 


ದೇವರನ್ನು


ಹೆಚ್ಚಿನೆಲ್ಲಾ


ಮನುಜರೂ

 

ಮುಂದೆ ಓದಿ...


ವಿಲಿಯಂ ಶೇಕ್ಸ್‌ಪಿಯರ್
ಮಹಾಜನ - ಶುಕ್ರವಾರ ೦೨:೩೦, ಮಾರ್ಚ್ ೧೨, ೨೦೧೦

ಆಶಿತ್ ಕೃಷ್ಣ ಉಪಾಧ್ಯಾಯ ಬಿಡಿಸಿದ ಒಂದು ಚಿತ್ರ ಇದು.


ಕೇಳು ಜನಮೇಜಯ…ವಿ‘ಜಯ’ ಕರ್ನಾಟಕದಲ್ಲಿ ಜಯವೇ ಜಯ
ವಿಮರ್ಶಕಿ - ಶುಕ್ರವಾರ ೧೨:೨೪, ಮಾರ್ಚ್ ೧೨, ೨೦೧೦

ಗೋಕರ್ಣದಲ್ಲಿ ಆಡಳಿತಾಧಿಕಾರಿ ನೇಮಕದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ದಾವೆಯನ್ನು ವಜಾ ಮಾಡಿದ್ದಾರೆ. ಈ ಸುದ್ದಿ ಕನ್ನಡದ ಬೇರೆ ದಿನಪತ್ರಿಕೆಗಳಲ್ಲೂ ಬಂದಿದೆ. ಆದರೆ ವಿಜಯ ಕರ್ನಾಟಕದಲ್ಲಿ ಮಾತ್ರ ‘ಜಯ’, ‘ಜಯ’ ಎಂದು ಹಲವಾರು ಬಾರಿ ಬರೆದು ಇನ್ನೇನು ಈ ಕೇಸಿನ ಕಥೆಯೇ ಮುಗಿದುಹೋಯಿತು ಎಂದು ವರದಿ ಮಾಡಿರುವುದು ಎಷ್ಟು ಸರಿ?   ಬೇರೆ ಪತ್ರಿಕೆಗಳಲ್ಲಿ ಈ ವರದಿ ಹೇಗೆ ಪ್ರಕಟವಾಗಿದೆ ಅನ್ನೋದನ್ನೂ ನೋಡಿ:     ನ್ಯಾಯಾಲಯದಲ್ಲಿ ಯಾವುದೋ ಒಂದು ಕಡೆ  ತೀರ್ಪು ಒಲಿಯಲೇಬೇಕು. ಆದರೆ ಆ ತೀರ್ಪಿನ [...]


ವೈಜ್ಙಾನಿಕ ಮೂಲಭೂತವಾದ ಅಂದರೆ ಏನು?!!!
ಸಿರಿಗನ್ನಡ ಸಂಪದ - ಗುರುವಾರ ೧೦:೩೮, ಮಾರ್ಚ್ ೧೧, ೨೦೧೦

ವೈಜ್ಙಾನಿಕ ಮೂಲಭೂತವಾದ ಎಂದರೆ ಏನು? ವಿಜ್ಙಾನವನ್ನು ಅಕ್ಷರಶಹ ನಂಬುವವರು, ಮೇಲಾಗಿ ಆ ನಂಬಿಕೆಯ ಆಧಾರದ ಮೇಲೆ ಇತರ ನಂಬುಗೆಗಳನ್ನು ತಿರಸ್ಕರಿಸುವವರು, ಅದಕ್ಕಿಂತಲೂ ಮೇಲಾಗಿ ಇತರ ವಿಚಾರಗಳನ್ನು ನಂಬಿಕೆಗಳನ್ನು ಥಿಯರಿಗಳನ್ನು ridicule ಮಾಡುವವರು. ಅಂತಹವರು ಎಲ್ಲಿದ್ದಾರೆ? ಎಲ್ಲೆಲ್ಲೂ ಇದ್ದಾರೆ. ಕೆಲವರು ಅರಿಯದೆ ಮೂಲಭೂತವಾದಿಗಳಾದರೆ, ಇನ್ನು ಕೆಲವರು ಮೂಲಭೂತವಾದವನ್ನೇ ವಿಜ್ಙಾನ ಎಂದು ತಿಳಿಯುತ್ತಾರೆ. ಇದೇ ವಿಚಾರಗಳು ಧರ್ಮ/ಮತಗಳಿಗೂ ಅನ್ವಯಿಸುತ್ತದೆ, ಆದರೆ ಅದು ಈ ಬರಹದ ವ್ಯಾಪ್ತಿಯಲ್ಲಿಲ್ಲ.


 

ಮುಂದೆ ಓದಿ...


ಚಿತ್ರ ಧ್ವನಿ (ಭಾಗ – 5 )
ಸಾಂಗತ್ಯ - ಗುರುವಾರ ೧೦:೩೭, ಮಾರ್ಚ್ ೧೧, ೨೦೧೦

ಚಿತ್ರಭಾಷೆಯ ಐದನೇ ಕಂತು. ಅಭಯಸಿಂಹರು ಬರೆದ ಈ ತಾಂತ್ರಿಕ ಲೇಖನದ ಮುಂದಿನ ಕಂತು ಸದ್ಯವೇ. ನಿಜ ಜೀವನದಲ್ಲಿ ಅನೇಕ ಬಾರಿ ನಾವು ತುಂಬಾ ಸಂತೋಷಗೊಂಡಾಗ, ಹೆಮ್ಮೆಯಿಂದ ಹೆಜ್ಜೆ ಹಾಕುವಾಗ ಮನಸ್ಸಿನಲ್ಲಿ ಯಾವುದೋ ಒಂದು ಹಾಡು ಗುನುಗುತ್ತೇವೆ ನೆನಪಿದೆಯಾ? ಕೆಲವೊಂದು ಬಟ್ಟೆಹಾಕಿ ನಡೆಯುವಾಗ ನಾವು ತುಂಬಾ ಅಂದವಾಗಿ ಕಾಣುತ್ತಿದ್ದೇವೆ ಎಂದು ನಮಗೇ ಅನ್ನಿಸಿ ಯಾವುದೋ ಸಿನೆಮಾ ಹೀರೋನಿಗೆ ಹೋಲಿಸಿ ಹಿನ್ನೆಲೆ ಸಂಗೀತವನ್ನು ನಾವೇ ಕೊಟ್ಟು ಸ್ಟೈಲ್ ಮಾಡುತ್ತೇವೆ ನೆನಪಿದೆಯಾ? ಹಾಗಾದರೆ ಈ ಹಿನ್ನೆಲೆ ಸಂಗೀತ ಎಂಬ ವಿಷಯ ಕುತೂಹಲಕರ ಅಲ್ಲವೇ? [...]


ಹೊಸ ಆರಂಭ
::apara:: - ಗುರುವಾರ ೧೦:೨೮, ಮಾರ್ಚ್ ೧೧, ೨೦೧೦

ನಿನ್ನಂತೆ ನನ್ನನ್ನೂ ಯಾರಾದರೂಬಂಡೆಗೆರಡು ಬಾರಿ ಕುಕ್ಕಿಜನ್ಮವನ್ನೇ ಜಾಲಾಡಿ ನಂತರಜೀವವೇ ಹೋಗಿಬರುವಂತೆ ಹಿಂಡಿನೇತುಹಾಕಿದರೆ ಹೀಗೇತೊಟ್ಟಿಕ್ಕುವೆ ನಿನ್ನಂತೆಯೇ ನಾನೂಸಿಗುವುದೆ ನನಗೆ ಅಂಥ ಶುಭ್ರ ಹೊಸ ಹುಟ್ಟುತಂತಿಮೇಲೆ ಒಣಗುತ್ತಿರುವ ಬಿಳಿಬಟ್ಟೆಯೆ ಹೇಳು


ಧರೆ
ಸಿರಿಗನ್ನಡ ಸಂಪದ - ಗುರುವಾರ ೧೦:೨೪, ಮಾರ್ಚ್ ೧೧, ೨೦೧೦

ಕಾಲದ ಸುಳಿಗೆ ಸಿಲುಕಿ
ತನ್ನಾಭರಣಗಳನ್ನೆಲ್ಲ ಕಳಚಿ
ನಿರಾಭರಣೆಯಾಗಿದ್ದಳವಳು

ಇಂದು ಅದೇ ಕಾಲದ ಮಹಿಮೆಗೆ
ಸಿಂಗಾರ ಮಾಡಿಕೊಂಡು
ನಳನಳಿಸುತ್ತಿದ್ದಳು

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ ಹೋಗುತ್ತಿರುವುದರಿಂದ)

 


ಇವತ್ತು ಏನ್ ತಿಂಡಿ ಮಾಡ್ಲೀ....
ಸಿರಿಗನ್ನಡ ಸಂಪದ - ಗುರುವಾರ ೦೯:೨೧, ಮಾರ್ಚ್ ೧೧, ೨೦೧೦

ಇವತ್ತು ಏನ್ ತಿಂಡಿ ಮಾಡ್ಲೀ....


ಹೌದು, ಇದು ಮನೆಯಲ್ಲಿ ಅಡುಗೆ ಮಾಡುವವರ ಸಮಸ್ಯೆ. ಮನೆಯಲ್ಲಿ ಒಬ್ಬರೇ ಇದ್ದರೆ ಒಂದಲ್ಲಾ ಮತ್ತೊಂದು ಮಾಡಿ ಅವತ್ತಿನ ದಿನವನ್ನ ಕಳೆದುಬಿಡಬಹುದು.  ಆದರೆ ಮನೆಯಲ್ಲಿ ಜಾಸ್ತಿ ಜನರಿದ್ದರೆ ಬರೋದೇ ಸಮಸ್ಯೆ ನೋಡಿ... ಅವಲಕ್ಕಿ ಮಾಡೋಣ ಅಂದ್ರೆ ಒಬ್ಬರಿಗೆ ಹುಳಿಯವಲಕ್ಕಿಯೇ ಆಗಬೇಕು.  ಮತ್ತೊಬ್ಬರಿಗೆ ಅವಲಕ್ಕಿ ಒಗ್ಗರಣೆಯೇ ಆಗಬೇಕು.  ಚಪಾತಿ ಮಾಡಿದರೆ ಒಬ್ಬರಿಗೆ ತೆಂಗಿನ ಚಟ್ನಿಯೇ ಬೇಕಾದರೆ ಮತ್ತೊಬ್ಬರಿಗೆ ತರಕಾರಿ ಸಾಗುವೇ ಸೊಗಸು.


ಅಬ್ಬಬ್ಬಾ!!!!  ಅದಿರಲಿ ಬಿಡಿ.  ಮೊದಲು ಏನು ತಿಂಡಿ ಮಾಡೋದು ಅಂತ ನಿರ್ಧಾರ ತೆಗೆದುಕೊಳ್ಳೋದಿಕ್ಕೇ ಸಮಯ ಬೇಕು.  ಪೊಂಗಲ್ ಮಾಡೋಣಾ ಅಂದ್ರೆ ಮನೇಲಿ ಹೆಸರುಬೇಳೆನೇ ಇರೋಲ್ಲ.  ಚಟ್ನಿ ಮಾಡೋಣ ಅಂದ್ರೆ ತೆಂಗಿನ ಕಾಯಿ ಖಾಲಿ!!!  ಉಪ್ಪಿಟ್ಟು ಮಾಡೋಣ ಅಂದ್ರೆ ಅದು ಕಾಂಕ್ರೀಟ್ ಯಾರು ತಿಂತಾರೆ ಅನ್ನೋ ಧೋರಣೆ.  ದೋಸೆ ಮಾಡಿದ್ರೆ ಅಯ್ಯೋ!!! ಇವತ್ತೂ ದೋಸೇನಾ... ಅನ್ನೋ ರಾಗ....

 

ಮುಂದೆ ಓದಿ...


ಸ್ವಗತೋನ್ಮತ್ತ ತಲ್ಲಣಗಳು
ಹೆಜ್ಜೆ - ಗುರುವಾರ ೦೮:೦೦, ಮಾರ್ಚ್ ೧೧, ೨೦೧೦

ಇಲ್ಲಿರುವುದೆಲ್ಲಾ ಬಿಡಿ ಬಿಡಿ ಭಾವನೆಗಳು. ಹತ್ತಾರು ಕ್ಷಣಗಳಲ್ಲಿ ಹೊಳೆದದ್ದು, ಜುಮ್ಮೆನ್ನುವಂತೆ ಮಾಡಿದ್ದು. ಇಲ್ಲಿನ ಪ್ರತೀ ಶಬ್ದ, ಸಾಲು ಹಲವಾರು ಅರ್ಥದೊಂದಿಗೆ ಕಾಡಿವೆ. ಬಿಡಿ ಸಾಲುಗಳಲ್ಲಿ ಒಂದಕ್ಕಿಂತ ಹೆಚ್ಚಿನ ಕತೆಗಳಿವೆ. ಹಾಗಂತ ಅನ್ನಿಸಿದೆ ಬರೆದಾದ ಮೇಲೆ. ಹಾಗಲ್ಲ ಅಂತಾನೂ ಅನ್ನಿಸಿದೆ, 'ಹಾಗನ್ನಿಸಿದ' ನಂತರದ ಫಳಿಗೆಗೆ. ನಿಮಗೇನು ಅನ್ನಿಸುತ್ತೋ...???

--
ಹೂ
ಮುತ್ತಿಟ್ಟರೆ
ಬಾಡುತ್ತಾಳೆ


--
ನಿನ್ನೆ
ಕಂಡ
ಸೂರ್ಯ
ಇವತ್ತಿಲ್ಲ
ಹಗಲು


--
ಕುಕ್ಕರಿನ
ವಿಶಿಲು
ಜೀವ
ತೇಗುತ್ತದೆ


--
ಕರಚಿದ
ಕರಿಬೇವಿನ
ಎಲೆಗಳಲಿ
ಒಗ್ಗರಣೆ
ಹಸಿರು


--
ಅಕ್ಷರ
ಮೂಡುತ್ತಿದೆ
ಕಂಪ್ಯೂಟರ್
ಪರದೆ
ಇನ್ನೂ
ಖಾಲಿ


--
ಹಳದಿ
ರಸೀತಿಯಲಿ
ಉಳಿದ
ಲೆಕ್ಕ
ಅರೆ
ಚುಕ್ತಾ


--
ಟೆರೇಸಿನಲಿ
ನಿಂತೆ
ನಾನು
ನಗರ
ಬೆತ್ತಲೆ


--
ನಾನಿದ್ದೇನೆ
ದೀಪದ
ಬುಡದಲ್ಲಿ
ಸತ್ತಿದೆ
ಹಾತೆ


೧೦ ಮುಂದೆ› ಕೊನೆ»

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.