ಕನ್ನಡಲೋಕ

೧೦ ಮುಂದೆ› ಕೊನೆ»


Where does Google + stand between twitter and facebook?
ಕಲಸುಮೇಲೋಗರ (KeKu's Blog) - ಶುಕ್ರವಾರ ೦೨:೦೦, ಫೆಬ್ರುವರಿ ೩, ೨೦೧೨

Facebook has nearly killed Orkut. Google Buzz died. I have been using Google+ for a few months now.

Facebook has connected innumerable long lost friends and classmates, although various social networking sites tried to achieve the same in the past and failed. Facebook succeeded; call it a hard work, vision or luck, it succeeded. People hate to use more than one service for the same purpose. If G+ is trying is pull people out of Facebook and join G+ in bulk, they are most likely to fail miserably. I am trying to guess that this is not the intention of the G+ team.

Twitter is all about catching the news around the world in one liners. Its also about time-pass chats (whats up twitter world? etc), gossiping (Shahrukh Khan slapgate etc), pulling legs of each other, and joking at life.


G+ platform is interesting. It is trying to connect REAL people who may or may not know each other, but share common interests. 

G+ is full of circles. Building your circle and posting in that circle makes more sense than posting everything in public.For example, as a radiologist, I do not want to post something related to radiology in 'public', but post it in 'radiology circle' to have a more meaningful closed communication. All my Kannada related thoughts will be posted only to 'Kannadigaru' cirlce. 

But we need a large number of active people who carefully select what to talk where? What to share where? 

Will G+ succeed? So far, my experience is not that good. Very few people are active on G+. 


ಮರಳಿ ಬಂದವಳು….!!!!
ನಿಲುಮೆ - ಶುಕ್ರವಾರ ೧೨:೨೯, ಫೆಬ್ರುವರಿ ೩, ೨೦೧೨

-ಸಂತೋಷ್ ಎನ್ ಆಚಾರ್ಯ ನಾನು ನೋಡುತ್ತಿರುವುದು ನಿಜವಾಗಿಯೂ ಅವಳನ್ನಾ! ಕಣ್ಣುಗಳನ್ನು ಮತ್ತೆ ಮತ್ತೆ ಉಜ್ಜಿ ನೋಡಿದೆ. ನಿಜಕ್ಕೂ ಅವಳೇ, ಸಂದೇಹವೇ ಇಲ್ಲ. ಸ್ವಲ್ಪ ದಪ್ಪವಾಗಿದ್ದಾಳೆ. ಮುಖದ ಕಾಂತಿ ಈಗಲೂ ಹಾಗೆಯೇ ಇದೆ. ‘ಏನೋ ಹಾಗೆ ನೋಡ್ತಾ ಇದ್ದೀಯಾ?’ ಎಂದಳು. ‘ನೀನು… ಇಲ್ಲಿ…?’ ಮಾತುಗಳ ಪ್ರಶ್ನೆಗಳಿಗಿಂತ ಮುಖದ ಪ್ರಶ್ನೆಗಳೇ ಎದ್ದು ತೋರುತ್ತಿದ್ದವು. ‘ಯಾಕೆ ಬರಬಾರದಾ?’ ಎಂದಳು . ನನಗೆ ಏನು ಉತ್ತರಿಸಬೇಕೆಂದೇ ಗೊತ್ತಾಗಲಿಲ್ಲ. ‘ಏನಾಯ್ತೋ ನಿಂಗೆ, ಓಕೆ, ಕಣ್ತುಂಬಾ ನೋಡೋ ಆಸೆ ನಾ! ನೋಡು ನೋಡು! ಮುಗಿದ ನಂತರ [...]


ಆ ದಿನಗಳನೆಂತು ಮರೆಯಲಿ ನಾನು 4
ಸಂಪದ - Sampada - ಶುಕ್ರವಾರ ೧೦:೫೮, ಫೆಬ್ರುವರಿ ೩, ೨೦೧೨


ವೇಣೂರಿನಲ್ಲಿ ಪಟ್ಟಾಭಿಷೇಕ ಸಂಭ್ರಮ...
ಈ ಕನಸು - ಶುಕ್ರವಾರ ೧೦:೧೧, ಫೆಬ್ರುವರಿ ೩, ೨೦೧೨

ರಾಜ್ಯ - ರಾಷ್ಟ್ರ

24ನೇ ತೀರ್ಥಂಕರ ಪಾರ್ಶ್ವ ನಾಥ ರ ಪಟ್ಟಾಭಿಷೇಕದ ರಾಜ್ಯ ಭಾರ ದೃಶ್ಯರೂಪಕ ಅತ್ಯಂತ ವೈಭವದಿಂದ ನೆರೆವೇರಿತು. ಕಾಶಿ ದೇಶದ ವಾರಣಾಸಿಯ ಅರಸ ಮನೆತನದ ವಿಶ್ವಸೇನ ಹಾಗೂ ಬ್ರಾಹ್ನಿದೇವಿ ದಂಪತಿಗಳ ಮಗನಾಗಿ ಜನಿಸಿದವ ಪಾರ್ಶ್ವ ನಾಥ .ಸಂಸಾರ ಜೀವನ ಬೇಡವೆಂದು ನಿರಾಕರಿಸಿದನು. ನಂತರ ರಾಜ್ಯ ಭಾರ ನಡೆಸುವಂತೆ ಕೋರಿದಾಗ ತಂದೆ-ತಾಯಿಯ ಮಾತಿಗೆ ಯುವರಾಜ ಪಟ್ಟಾಭಿಷೇಕ ನಡೆಸಲು ಒಪ್ಪಿಗೆ ನೀಡಿದ.


ಪಟ್ಟಾಭಿಷೇಕದ ವೇಳೆಯಲ್ಲಿ ರಾಜ ನರ್ತಕಿಯ ನೃತ್ಯ ಪ್ರದರ್ಶನ ನಡೆಯುತ್ತದೆ. 56 ದೇಶಗಳ ರಾಜರು ಕಪ್ಪ ಕಾಣಿಕೆಯನ್ನು ಸಲ್ಲಿಸುತ್ತಾರೆ. ಅಜಿಲ ವಂಶದ ಅರಸರಾದ ಡಾ| ಪದ್ಮಾಪ್ರಸಾದ್ ಹಾಗೂ ಕುಡುಮ ಮನೆತನದ ಡಾ. ವೀರೇಂದ್ರ ಹೆಗ್ಗಡೆ ಮನೆಯವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಒಟ್ಟಿನಲ್ಲಿ ಪಾರ್ಶ್ವನಾಥರ ರಾಜ್ಯ ಭಾರವನ್ನು ಬಹಳ ಸೊಗಸಾಗಿ ಕಣ್ಣಿಗೆ ಕಟ್ಟುವ ಹಾಗೆ ಅಭಿನಯಿಸಿದ್ದಾರೆ. ಹಿಮ್ಮೇಳದಲ್ಲಿ ಮೂಡಿ ಬಂದ ಕಥಾ ಸ್ವರೂಪವೂ ದೃಶ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿತು.

- ಶ್ವೇತ ಕುಮಾರಿ ಎಲ್. ಕೆ


ನೆನಪೇ ನೆರಳು!
ಆಸುಮನ (ASUMANA) - ಶುಕ್ರವಾರ ೧೦:೦೩, ಫೆಬ್ರುವರಿ ೩, ೨೦೧೨

ನನ್ನ ಹಿಂದೆ ಮುಂದೆ ಅತ್ತ ಇತ್ತ ಸದಾ ನನ್ನ ಸುತ್ತಮುತ್ತ ಇರುವ ನೆರಳಿನಂತೆಯೇ ನಿನ್ನ ನೆನಪೂ ಒಂದರೆಗಳಿಗೆ ಬಿಟ್ಟಿರುವುದಿಲ್ಲ ನನ್ನನ್ನು; ಕತ್ತಲಾವರಿಸಿದಾಗ ಮರೆಯಾಗುವ ಈ ನೆರಳಿನಂತೆ ಅಹಂಕಾರದ ಕತ್ತಲೆ ನನ್ನ ಮನವನ್ನು ಆವರಿಸಿದಾಗ ತೊರೆಯುತ್ತದೆ ನಿನ್ನ ನೆನಪೂ ನನ್ನನ್ನು! *** ಚಿತ್ರ ಕೃಪೆ: ಪ್ರಕಾಶ್ ಹೆಗಡೆ 


ಸಂಕಲ್ಪ ಹಿಂಸೆ
ಈ ಕನಸು - ಶುಕ್ರವಾರ ೦೯:೫೨, ಫೆಬ್ರುವರಿ ೩, ೨೦೧೨

ರಾಜ್ಯ - ರಾಷ್ಟ್ರ

ವೇಣೂರು :ಮಹಾಮಸ್ತಕಾಭಿಷೇಕದ ಪ್ರಯುಕ್ತ ಉಜಿರೆ ಶ್ರೀ ಧ. ಮಂ. ರಂಗ ತರಬೇತಿ ಕೇಂದ್ರ ಇವರ ವತಿಯಿಂದ 'ಸಂಕಲ್ಪ ಹಿಂಸೆ' ದೃಶ್ಯ ರೂಪಕ ಜರುಗಿತು. 'ಯಶೋಧರ ಚರಿತೆ' ಕಥಾನಕವನ್ನು ಆಧರಿಸಿದ ಈ ರೂಪಕ ಜನಮನ ಸೂರೆಗೊಂಡಿತು. ಇಬ್ಬರು ದಾರಿಹೋಕರು ಹಿಂದೆ ಜರುಗಿದ ಕಥೆಯನ್ನು ವಿವರಿಸುವಂತೆ ಪ್ರಾರಂಭವಾದ ನಾಟಕದ ಎಲ್ಲಾ ದೃಶ್ಯಗಳೂ ಹಾಗೂ ಅಭಿನೇತ್ರಿಗಳ ಪಾತ್ರ ನಿರ್ವಹಣೆಯು ಅತ್ಯಧ್ಭುತವಾಗಿ ಮೂಡಿಬಂತು.



ಬರೇ ಪಾತ್ರ ನಿರ್ವಹಣೆಯಲ್ಲಲ್ಲದೆ ಸಂಗೀತ, ಲ್ಶೆಟಿಂಗ್ಸ್, ಇತ್ಯಾದಿ ವಿಷಯಗಳನ್ನೂ ಸಮರ್ಪಕವಾಗಿ ನಿಭಾಯಿಸಿದ ತರಬೇತಿ ಕೇಂದ್ರವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.


- ಚೇತನಾ ವಸಿಷ್ಠ


ಸಮದ್ರದಾಳದ ವಿಶಿಷ್ಟ ಗಣತಿ
ಇಜ್ಞಾನ ಡಾಟ್ ಕಾಮ್ - ಶುಕ್ರವಾರ ೦೯:೩೧, ಫೆಬ್ರುವರಿ ೩, ೨೦೧೨

ಟಿ. ಜಿ. ಶ್ರೀನಿಧಿ ೧೯೯೦ರಲ್ಲಿ ಜಪಾನಿನ ಒಸಾಕಾದಲ್ಲಿ ಒಂದು ದೊಡ್ಡ ಪ್ರದರ್ಶನ ನಡೆದಿತ್ತು, ಅಂತರರಾಷ್ಟ್ರೀಯ ಉದ್ಯಾನ ಹಾಗೂ ವನರಾಜಿ ಪ್ರದರ್ಶನ ಅಂತ; ಚಿಕ್ಕದಾಗಿ ಅದನ್ನು ಎಕ್ಸ್‌ಪೋ '೯೦ ಅಂತ ಕರೆದಿದ್ದರು. ಉದ್ಯಾನಗಳ ಬಗೆಗೆ ಅಷ್ಟೊಂದು ದೊಡ್ಡ ಪ್ರದರ್ಶನ ನಡೆದದ್ದು ಏಷಿಯಾಕ್ಕೆಲ್ಲ ಅದೇ ಮೊದಲು. ಎಕ್ಸ್‌ಪೋ '೯೦ ನಡೆದ ಆರು ತಿಂಗಳ ಕಾಲವೂ 'ಪ್ರಕೃತಿಯ ಜೊತೆ ಮಾನವನ ಸೌಹಾರ್ದಯುತ ಸಹಬಾಳ್ವೆ' ಎಂಬ ವಿಷಯದ ಸುತ್ತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಆದರೆ ಪ್ರಕೃತಿ-ಮಾನವನ


ಕರಗಿ ಹೋದ ಕರಿಬಸವಯ್ಯ!
ಏನ್ ಗುರು... ಕಾಫಿ ಆಯ್ತಾ? - ಶುಕ್ರವಾರ ೦೬:೩೨, ಫೆಬ್ರುವರಿ ೩, ೨೦೧೨


(ವಿಡಿಯೋ ಕೃಪೆ: ಸುವರ್ಣ ನ್ಯೂಸ್ - ಯೂ ಟ್ಯೂಬ್ ಮೂಲಕ)

ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾದ ಶ್ರೀ ಕರಿಬಸವಯ್ಯನವರು ಇನ್ನಿಲ್ಲ ಎನ್ನುವ ಸುದ್ದಿ ಬಿತ್ತರವಾಗುತ್ತಿದೆ. ಇದು ಸುಳ್ಳಾಗಿರಲಿ ಎನ್ನುವ ಆಶಯ ಎಲ್ಲಾ ಕನ್ನಡಿಗರದ್ದು!! ಕನಕಪುರ ರಸ್ತೆಯಲ್ಲಿ ಆದ ರಸ್ತೆ ಅಪಘಾತದಲ್ಲಿ ಗಾಯಾಳುವಾಗಿದ್ದ ಈ ಕಲಾವಿದರು ಇಂದು ತೀರಿಕೊಂಡ ಸುದ್ದಿ ಆಘಾತಕಾರಿಯಾಗಿದೆ. ಇವರ ಆತ್ಮಕ್ಕೆ ಚಿರಶಾಂತಿ ಸಿಗಲಿ!! ಬನವಾಸಿ ಬಳಗದ ಶ್ರದ್ಧಾಂಜಲಿಗಳು!!


ಪಟ್ಟಣಕ್ಕೆ ಬಂದ 'ಪುಟ್ಟ' -ಚಲನ ಚಿತ್ರ 'ನಿರುದೇಶಕನಾದ' ಕಥೆ -ಭಾಗ-೫
ಸಂಪದ - Sampada - ಶುಕ್ರವಾರ ೦೬:೨೮, ಫೆಬ್ರುವರಿ ೩, ೨೦೧೨

image/jpeg iconbildng.JPG

 

 

 

 

   

 

ಮುಂದೆ ಓದಿ...


ಸಾಬೂನು ತಯಾರಿ ಪ್ರಾತ್ಯಕ್ಷಿಕೆ
MSCHS Nirchal: MAHAJANA - ಶುಕ್ರವಾರ ೦೪:೫೬, ಫೆಬ್ರುವರಿ ೩, ೨೦೧೨

ನಿನ್ನೆ ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಶರತ್ ರಾಜ್ ಮತ್ತು ಆತನ ತಾಯಿ ಶ್ರೀಮತಿ ರತ್ನಾವತಿ ಬೇಳ ನಮ್ಮ ಶಾಲಾ ವಿದ್ಯಾರ್ಥಿಗಳಿಗಾಗಿ ಸಾಬೂನು ತಯಾರಿಯ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.


ನನ್ನವಳು ನನ್ನ ನೋಡಿ ನಗುವಿನ ಆ ಅಂದ
ಸಂಪದ - Sampada - ಶುಕ್ರವಾರ ೦೪:೨೨, ಫೆಬ್ರುವರಿ ೩, ೨೦೧೨

ನನ್ನವಳು ನನ್ನ ನೋಡಿ ನಗುವಿನ ಆ ಅಂದ

ಮನೆ ಮನಗಳ ತುಂಬೆಲ್ಲಾ ಶ್ರೀಗಂಧ

ಆ ಹುಣ್ಣಿಮೆಯ ಚಂದಮನು ಬಳಿ ಬಂದಾ

ನಿನ್ನವಳೇ ನನಗಿಂತ ಬಲು ಚಂದಾ ಎಂದ

 

ನನ್ನವಳ ಕಣ್ಣುಗಳ ಹೋಳಪನು ರ‍ವಿ ಕಂಡಾ

ನಿನ್ನವಳ ಕಣ್ಣುಗಳಲಿ ನಾ ಮುಳಗಲೇ ಎಂದ

ಕಣ್ಣ ಹುಬ್ಬುಗಳ ಸಿರಿ ಕಂಡ ಬೃಹ್ಮನು ಮನ ನೊಂದು

ಕಾಮನಬಿಲ್ಲಿಗೆ ಬೆಲೆ ಎಲ್ಲಿ ಭೂವಿಯಲಿ ಇನ್ಮುಂದೆ ಎಂದ

 

ನನ್ನವಳ ತುಟಿಗಳ ನಾಚಿಕೆಯ ನಡುಕದ

ಸವಿ ಉಂಡ ಸೂರ್ಯನ ಕಿರಣಗಳ ಅಂದ

ಆಗುಂಬೆಯ ಸೂರ್ಯಾಸ್ತವೇ ನಿಬ್ಬೆರಗಾಗಿ

ನಾಚಿ ನೊಡುತಿಹುದು ಎಂದ

ನನ್ನವಳ ಹಲ್ಲುಗಳ ಜೊಡನೆಯ ಅಂದ

ಸಹ್ಯಾದ್ರಿ ಗಿರಿ ಸಾಲುಗಳಿಗೆ

ಹೊಲಿಸದಿರುವುದೆ ಒಳಿತು ಎಂದ

 

ನನ್ನವಳ ಕೊರಳಿನ ಆಭರಣಗಳ ಶೃಂಗಾರವನು

ಮನಗಂಡ ಮನ್ಮಥನು ಅಂದಾ

ಆಭರಣಗಳ ಚಲುವು ನಿನ್ನ ಕೊರಳಿನ ಅಂದದಿಂದ

ನನ್ನವಳ ಬಳಕುವ ನಡುವಿನ ಮಾಟವನು

ಕಂಡ ನಟರಾಜನು ಅಂದಾ

ನಾಟ್ಯಕ್ಕೆ ಇದುವೇ ಹೊಸ

 

ಮುಂದೆ ಓದಿ...


ಬೆಚ್ಚನೆಯ ಗೂಡಿನ 'ಕನಸು'
ಈ ಕನಸು - ಶುಕ್ರವಾರ ೦೨:೪೭, ಫೆಬ್ರುವರಿ ೩, ೨೦೧೨

ಕ್ಲಿಕ್

ಮೈಸೂರು: ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮದಲ್ಲಿ ಕೊಕ್ಕರೆಯೊಂದು ಮರದ ಟೊಂಗೆಯೊಂದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಗೂಡುಕಟ್ಟಲು ಸಿದ್ಧವಾಗುತ್ತಿದೆ.

ಕೃಪೆ: ಪಿ.ಟಿ.ಐ


ಸೆಣಬಿನ ಉತ್ಪನ್ನಕ್ಕೆ ಉತ್ತಮ ಬೇಡಿಕೆ
ಈ ಕನಸು - ಶುಕ್ರವಾರ ೦೨:೩೮, ಫೆಬ್ರುವರಿ ೩, ೨೦೧೨

ಇದು ನಮ್ಮ ದೇಶಿಯ ಕಲೆ

ಸಮಾಜದಲ್ಲಿ ದೇಶಿಯ ಕಲೆಯನ್ನು ಅಲ್ಲಗಳೆದು ವಿದೇಶಿಯ ಕಲೆಗೆ ಮಾರು ಹೋಗುತ್ತಿರುವವರ ಸಂಖ್ಯೆ ಅಧಿಕ . ಅಂತಹದರಲ್ಲೂ ದೇಶಿಯ ಕಲೆಗೆ ಮಹತ್ವ ನೀಡಿ, ಕಲೆಯನ್ನು ಮುಂದುವರಿಸಿಕೊಂಡು ಬಂದಿರುವ ಸೆಣಬು ನಾರಿನ ಕಲೆಯನ್ನು ವೇಣೂರು ಮಸ್ತಕಾಭಿಷೇಕ ಪ್ರದರ್ಶನ ಮಳಿಗೆಯಲ್ಲಿ ಕಾಣಬಹುದು. ಇದನ್ನು ಕುಂದಾಪುರ ತಾಲ್ಲೂಕು ಶಿರೂರಿನ 'ನಿವ್ ಇಂಡಿಯ ಹ್ಯಾಂಡ್ ಕ್ರಾಪ್ಟ್' ಸಮಿತಿಯು ಆಯೋಜಿಸಿದೆ. ಇವರು ಸೆಣಬು ಮತ್ತು ಹತ್ತಿಯಿಂದ ತಯಾರಿಸಿದ ನೂರಾರು ಬಗೆಯ ಉತ್ಪನ್ನಗಳನ್ನು ಪ್ರದರ್ಶನದಲ್ಲಿ ಇರಿಸಿದ್ದಾರೆ.



ಇವರ ಈ ಪ್ರದರ್ಶನಕ್ಕೆ ಮನಸೋತು ಹಲವಾರು ಪ್ರಶಸ್ತಿಗಳು ಲಭಿಸಿದ್ದು ಇತ್ತೀಚೆಗೆ ಕೊಡಚಾದ್ರಿ ಉತ್ಸವದಲ್ಲಿ ಪ್ರದರ್ಶನಕ್ಕೆ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಈ ಉತ್ಪನ್ನಗಳು ಸೆಣಬಿನ ನಾರಿನಿಂದ ತಯಾರಿಸಲ್ಪಟ್ಟಿದ್ದು ಉತ್ಪನ್ನಗಳ ಮೇಲಿರುವ ಹತ್ತಿಯ ಕಲೆಯು ಚಿತ್ತಾಕರ್ಷಕವಾಗಿದೆ. ಈ ಉತ್ಪನ್ನಗಳ ತಯಾರಿಕೆಯಲ್ಲಿ ಸುಮಾರು 50ರಿಂದ 55 ಮಹಿಳೆಯರು ಪಾಲುಗೊಂಡಿದ್ದು, 10 ರೂ. ಯಿಂದ 250ರೂ ವರಗಿನ ಉತ್ಪನ್ನಗಳನ್ನು ನೋಡಬಹುದಾಗಿದೆ. ಇಷ್ಟು ಜನರಿಂದ ತಯಾರಾಗುತ್ತಿರುವ ಈ ಉತ್ಪನ್ನಗಳು ನಿರುದ್ಯೋಗದ ಕೇಂದ್ರ ಬಿಂದು ಎಂದರೂ ತಪ್ಪಾಗಲಾರದು. ವಿದೇಶಗಳಿಗೂ ಈ ಉತ್ಪನ್ನ ರವಾನೆಯಾಗುತ್ತಿದೆ. ಉತ್ಕೃಷ್ಠ ಕುಸುರಿ ಕಲಾತ್ಮಕತೆ ಈ ಉತ್ಪನ್ನಗಳಲ್ಲಿವೆ.

ಪುಷ್ಪ ಬಿ.ಎಂ, ಮುಂಡಾಜೆ


ಮಹಾಮಜ್ಜನದ ಸಂಭ್ರಮದಲ್ಲಿ ವೇಣೂರು...
ಈ ಕನಸು - ಶುಕ್ರವಾರ ೦೨:೧೫, ಫೆಬ್ರುವರಿ ೩, ೨೦೧೨

ರಾಜ್ಯ - ರಾಷ್ಟ್ರ

ಗೊಮ್ಮಟ ಬೆಟ್ಟ ವೇಣೂರು
ವೇಣೂರು : ವೇಣೂರು ಗೊಮ್ಮಟನಿಗೆ ಮಹಾ ಮಜ್ಜನದ ಸಂಭ್ರಮ. ಇಡೀ ವೇಣೂರು ಇದೀಗ ಜನಸಾಗರದಲ್ಲಿ ಮುಳುಗಿದೆ. ದಿನ ದಿನವೂ ಮಜ್ಜನದ ಸಂದರ್ಭ ಗೊಮ್ಮಟ ಮೂರ್ತಿ ವಿವಿಧ ವರ್ಣಗಳಲ್ಲಿ ಕಂಗೊಳಿಸುತ್ತಿದ್ದರೆ ಇತ್ತ ಮಹಾಮಜ್ಜನಕ್ಕಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಮಹಾ ಮಸ್ತಕಾಭಿಷೇಕದ ಪ್ರಯುಕ್ತ ಯಾಗಮಂಡಲ ಪೂಜೆಯ ಎರಡನೇ ದಿನದ ಸಿದ್ದತೆ ಭರದಿಂದ ಸಾಗುತ್ತಿದೆ. ಭಗವಾನ್ ಪಾರ್ಶ್ವ ನಾಥರ ಜೀವನದ 5 ಪ್ರಮುಖ ಕಾಲಘಟ್ಟಗಳಾದ ಪಂಚಕಲ್ಯಾಣಗಳನ್ನು ಈ ಯಾಗಮಂಡಲ ಪೂಜೆಯ ಮೂಲಕ ಪ್ರತಿಬಿಂಬಿಸಲಾಗುತ್ತಿದೆ. ಗರ್ಭಾವತರಣ, ಜನ್ಮ, ದೀಕ್ಷಾ, ಕೇವಲಜ್ಞಾನ ಮತ್ತು ನಿರ್ವಾಣ ಎಂಬ ಪಂಚಕಲ್ಯಾಣಗಳನ್ನು ಈ ಪೂಜೆಯ ಮೂಲಕ ವಿಜೃಂಭಣೆಯಿಂದ ನಡೆಸಲಾಗುತ್ತಿದೆ.
ಜೈನರ ಈ ವಿಶಿಷ್ಟ ಪೂಜೆಗೆ ಜಲ, ಗಂಧ, ಅಕ್ಷತೆ, ಪುಷ್ಪ, ಚರು, ದೀಪ, ಧೂಪ, ಫಲದಿಂದೊಡಗೂಡಿದ ಅಷ್ಟವಿಧ ಅರ್ಚನೆಯನ್ನು ಮಾಡಲಾಗುತ್ತದೆ ಹಾಗೂ 5 ಬಣ್ಣಗಳಾದ ನೀಲಿ, ಹಳದಿ, ಪಚ್ಚೆ, ಬಿಳಿ, ಕೆಂಪುಗಳಿಂದೊಳಗೂಡಿದ ಬೃಹತ್ ರಂಗೋಲಿಯನ್ನು ರಚಿಸಲಾಗಿದೆ.

ಪುಷ್ಪ ಬಿ.ಎಮ್ / ಚೇತನಾ ವಸಿಷ್ಠ


ಅಗತ್ಯವಿದ್ದಷ್ಟೇ ತಾಂತ್ರಿಕತೆಯಿರಲಿ: ಕಶ್ಯಪ್
ಈ ಕನಸು - ಶುಕ್ರವಾರ ೦೨:೦೯, ಫೆಬ್ರುವರಿ ೩, ೨೦೧೨

ಕುಪ್ಪಳ್ಳಿಯಲ್ಲೊಂದು ಚಲನಚಿತ್ರೋತ್ಸವ...

ಕುಪ್ಪಳಿ : ಸಿನಿಮಾಗಳಿಗೆ ಎಷ್ಟು ಅಗತ್ಯವೋ ಅಷ್ಟೇ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಳ್ಳಬೇಕೆಂಬುದು ಖ್ಯಾತ ಸಿನಿಮಾ ನಿರ್ದೇಶಕ ಮತ್ತು ಸಿನೆಛಾಯಾಗ್ರಾಹಕ ಅಶೋಕ್ ಕಶ್ಯಪ್ ನವರ ಅಭಿಪ್ರಾಯ.


ಕುಪ್ಪಳಿಯಲ್ಲಿ ನಡೆದ ಏಳನೇ ಚಿತ್ರಶಿಬಿರದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಶಿಬಿರಾರ್ಥಿಗಳಿಗೆ ಹಂಚಿಕೊಂಡ ಅವರು, ಇಂದು ಸಾಕಷ್ಟು ತಾಂತ್ರಿಕ ಆವಿಷ್ಕಾರಗಳು ಆಗಿವೆ. ಆದರೆ ಅವೆಲ್ಲವನ್ನೂ ಬಳಸಲು ಮನುಷ್ಯನೇ ಇರಬೇಕೆಂಬುದನ್ನು ಮರೆಯಬಾರದು ಎಂದದ್ದು ಅವರು.
ಇಂದು ಒಂದು ಸಿನಿಮಾವನ್ನು ಸ್ಟುಡಿಯೋದಲ್ಲೇ ಕುಳಿತು ರೂಪಿಸುವ ಮಟ್ಟಕ್ಕೆ ತಾಂತ್ರಿಕತೆ ಅಭಿವೃದ್ಧಿಗೊಂಡಿದೆ. ಆದರೆ ಈ ವ್ಯತ್ಯಾಸ ಬಹಳಷ್ಟು ಬಾರಿ ಸಿನಿಮಾ ನೋಡುವ ಸಾಮಾನ್ಯ ಪ್ರೇಕ್ಷಕನ ಅರಿವಿಗೆ ಬಾರದು. ಆದರೆ ನಮ್ಮ ಪ್ರಯತ್ನದಲ್ಲಿ ಸೃಜನಶೀಲತೆ ಉಳಿಸಿಕೊಳ್ಳಬೇಕಾದರೆ ತಾಂತ್ರಿಕತೆ ಬಳಕೆಯ ಕುರಿತ ಔಚಿತ್ಯ ಪ್ರಜ್ಞೆ ಪ್ರತಿಯೊಬ್ಬ ಸಿನಿಮಾ ರೂಪಿಸುವವನಿಗೂ ಗೊತ್ತಿರಬೇಕು ಎಂದು ಹೇಳಿದರು.

ಹಾಲಿವುಡ್ ನಲ್ಲಿ ಬಳಸಲಾದ ಅತ್ಯಾಧುನಿಕ ತಾಂತ್ರಿಕತೆ ಭಾರತಕ್ಕೆ, ಬೆಂಗಳೂರಿಗೆ ಬರಲು ವರ್ಷಗಟ್ಟಲೇ ಬೇಕಾಗಿಲ್ಲ. ಕೇವಲ ಎರಡು ತಿಂಗಳಲ್ಲಿ ಆ ತಾಂತ್ರಿಕ ಆವಿಷ್ಕಾರ ಕನ್ನಡ ಸಿನಿಮಾಗಳಲ್ಲೂ ಹರಿದಾಡಬಹುದು. ಆದರೆ ಅದನ್ನು ಬಳಸುವ ಸಂದರ್ಭದಲ್ಲಿ ನಮ್ಮ ನಮ್ಮ ಅಗತ್ಯ ಮತ್ತು ಔಚಿತ್ಯವನ್ನು ಕಂಡುಕೊಳ್ಳಬೇಕು. ಇಲ್ಲದಿದ್ದರೆ ಪ್ರೇಕ್ಷಕ ಯಾವುದನ್ನೂ ನಂಬದ ಸ್ಥಿತಿ ಬರಬಹುದು ಎಂದು ಎಚ್ಚರಿಸಿದರು.

ಡಿಜಿಟಲ್ ತಂತ್ರಜ್ಞಾನ ಸಿನಿಮಾ ವಿತರಣೆಯ ಕೆಲಸವನ್ನು ಹಗುರಗೊಳಿಸಿದೆ ಎಂದ ಅವರು, ಕ್ಯೂಬ್ ಇತ್ಯಾದಿ ತಂತ್ರಜ್ಞಾನದಿಂದ ಒಂದೇ ನೆಲೆಯಿಂದ ನೂರಾರು ಸಿನಿಮಾ ಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಬಹುದು. ಬೆಂಗಳೂರಿನಂತಹ
ನಗರಗಳಲ್ಲಿ ಸಾಕಷ್ಟು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಬಂದಿವೆ. ಇವುಗಳಿಂದ ಏಕಕಾಲದಲ್ಲಿ ಹಲವು ಪ್ರದರ್ಶನಗಳನ್ನು ತೋರಿಸಲು ಸಾಧ್ಯವಾಗಿದೆ. ಇಂತಹ ಮಲ್ಟಿಫ್ಲೆಕ್ಸ್ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಗೆ ಬಂದರೆ ಬಹಳ ಅನುಕೂಲವಾದೀತು ಎಂದು ಅಭಿಪ್ರಾಯಪಟ್ಟರು.

ಮುಕ್ತ ಸಂವಾದದಲ್ಲಿ ಪಾಲ್ಗೊಂಡಿದ್ದ ಚಿತ್ರ ನಿರ್ಮಾಪಕಿ ರೇಖಾರಾಣಿ, ಇಂದು ಕಥೆ ಕೇಳುವ ವ್ಯವಧಾನವೇ ಬಹಳಷ್ಟು ನಿರ್ದೇಶಕರು, ನಿರ್ಮಾಪಕರಿಗಿಲ್ಲ. ಹಾಗಾಗಿ ಐದಾರು ಚಿತ್ರ ಸೇರಿಸಿ ಒಂದು ಕಥೆ ಹೆಣೆದು ಚಿತ್ರ ರೂಪಿಸುವ ಸ್ಥಿತಿ ಬಂದಿದೆ ಎಂದು ವಿಷಾದಿಸಿದರು.

ಚಿತ್ರಕಥೆ ಬರೆಯುವುದು ಕಷ್ಟಕರವೆನ್ನುವುದಕ್ಕಿಂತಲೂ ಅತ್ಯಂತ ಸೃಜನಶೀಲವಾದುದು. ಅದು ಹೆಚ್ಚು ಸಮಯವನ್ನು ಬೇಡುವಂಥದ್ದು ಎಂದ ಅವರು, ಸಿನಿಮಾ ಮಾಧ್ಯಮವನ್ನು ತಿಳಿಯಲು ಬಯಸುವ ಆಸಕ್ತ ಯುವಜನರಿಗೆ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರು ಮಾತನಾಡಿ, ಸಾಂಗತ್ಯ ಮೂರು ವರ್ಷಗಳಿಂದ ಇಂತಹ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದೆ. ಜನರಿಗೆ ಮಾಹಿತಿ ಒದಗಿಸುವ ಇಂತಹ ಕಾರ್ಯಕ್ರಮ ಹೆಚ್ಚಾಗಬೇಕು ಎಂದು ಆಶಿಸಿದರು.

ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಎರಡು ದಿನಗಳಲ್ಲಿ ಆರು ಚಿತ್ರಗಳು ಪ್ರದರ್ಶಿತವಾದವು. ಚಿತ್ರ ಶಿಬಿರದಲ್ಲಿ ಪ್ರದರ್ಶಿತವಾದ ಕನ್ನಡದ ಒಲವೇ ಮಂದಾರ ಚಲನಚಿತ್ರದ ಕುರಿತು ಮುಕ್ತ ಚರ್ಚೆ ನಡೆಯಿತು. ಕೆಲವೊಂದು ಸಣ್ಣಪುಟ್ಟ ಲೋಪದೋಷಗಳ ಮಧ್ಯೆ ಒಂದು ಒಳ್ಳೆಯ ಪ್ರಯತ್ನ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಾಂಗತ್ಯದ ವ್ಯವಸ್ಥಾಪಕ ಟ್ರಸ್ಟಿ ಪರಮೇಶ್ ಗುರುಸ್ವಾಮಿ, ಮೊದಲ ದಿನದಂದು ಸಿನಿಮಾದಲ್ಲಿ ನಿರೂಪಣಾ ಕೌಶಲ್ಯದ ಕುರಿತು ಮಾತನಾಡಿದರು. ಕೊಪ್ಪದ ವಕೀಲರಾದ ಸುಧೀರ್ ಕೊಪ್ಪ ಮುರೊಳ್ಳಿ ನಿರೂಪಿಸಿದರು. ಆರು ಚಿತ್ರಗಳ ಪೈಕಿ ಐದು ಚಿತ್ರಗಳ ಚರ್ಚೆಯನ್ನು ಟೀನಾ ಶಶಿಕಾಂತ್, ನಿರಂಜನ್, ದೇವನೂರು ಚಂದ್ರು, ಪರಮೇಶ್ ಗುರುಸ್ವಾಮಿ ನಡೆಸಿಕೊಟ್ಟರು. ಶಿಬಿರಾರ್ಥಿಗಳಾದ ಅಕ್ಕಿಕಾಳು ವೆಂಕಟೇಶ್, ಮಂಜುನಾಥ್, ಶಶಿಧರ್ ಹೊಸಕೋಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಅಧಿಕಾರದ ಹಪಹಪಿಕೆ ಮತ್ತು ಬದುಕಿನ ಕ್ಷಣಭಂಗುರತೆ
Mouna kanive - ಶುಕ್ರವಾರ ೦೨:೦೭, ಫೆಬ್ರುವರಿ ೩, ೨೦೧೨



ಪಂಪ-ಕನ್ನಡದ ಆದಿ ಕವಿ. ಎಲ್ಲರನ್ನೂ ಎಲ್ಲಾ ಕಾಲಕ್ಕೂ ಕಾಡುವ ಮಹಾನ್ ಪ್ರತಿಭೆ. ಈತ ಮತ್ತೆ ನೆನಪಾಗಿದ್ದು ಮೊನ್ನೆ ಸಂಸ ಬಯಲು ರಂಗಮಂದಿರದಲ್ಲಿ ಪ್ರದರ್ಶನಗೊಂಡ ನಾಟಕ ’ಮಸ್ತಕಾಭಿಷೇಕ ರಿಹರ್ಸಲ್’ ನಲ್ಲಿ. ಎಚ್.ಎಸ್. ಶಿವಪ್ರಕಾಶ್ ರಚಿಸಿದ ಈ ನಾಟಕವನ್ನು ’ಅನೇಕ’ ತಂಡ ಅಭಿನಯಿಸಿತ್ತು. ನಿರ್ದೇಶನ ಸುರೇಶ್ ಅನಗಳ್ಳಿ ಅವರದು.

ಜರ್ಮನಿಯ ಬರ್ಲಿನ್ ನಲ್ಲಿರುವ ರವೀಂದ್ರನಾಥ್ ಟ್ಯಾಗೂರ್ ಪೀಠದ ನಿರ್ದೇಶಕರಾಗಿ ಆಯ್ಕೆಯಾದ ಸಂದರ್ಭದಲ್ಲಿ ಶಿವಪ್ರಕಾಶ್ ರನ್ನು ಅಭಿನಂದಿಸಲು ಭಾರತ ಯಾತ್ರ ಕೇಂದ್ರವು ಅವರ ನಾಟಕೋತ್ಸವನ್ನು ಏರ್ಪಡಿಸಿತ್ತು. ಅಲ್ಲಿ ಪ್ರದರ್ಶಿತವಾದ ನಾಟಕವಿದು. ಈ ನಾಟ್ಅಕ ಈಗಾಗಲೇ ದೆಹಲಿಯಲ್ಲಿ ನಡೆದ ಎನ್.ಎಸ್.ಡಿ ಪ್ರಾಯೋಜಿತ ಭಾರತ ರಂಗೋತ್ಸವದಲ್ಲಿ ಪ್ರದರ್ಶಗೊಂಡಿದೆ. ಇದು ಅದರ ಎರಡನೇ ಪ್ರದರ್ಶನ.

ಎಚ್.ಎಸ್. ಶಿವಪ್ರಕಾಶ್ ಕನ್ನಡದ ಪ್ರಮುಖ ನಾಟಕಕಾರಲ್ಲಿ ಒಬ್ಬರು. ಅದಕ್ಕಿಂತಲೂ ಮಿಗಿಲಾಗಿ ಅವರೊಬ್ಬ ಅನುಭಾವ ಕವಿ.ಅವರನ್ನು ಬಸವಣ್ಣನಂತೆ ಅಲ್ಲಮನೂ ಕಾಡಿದ್ದಾನೆ. ಈ ನಾಟ್ಕದಲ್ಲಿ ಅವರನ್ನು ಕಾಡಿದ್ದು ಬಾಹುಬಲಿ. ಅದರಲ್ಲಿಯೂ ಪಂಪನ ’ಆದಿಪುರಾಣ’ದಲ್ಲಿ ಅಂತರ್ಗತವಾಗಿರುವ ಭೋಗ ನಶ್ವರತೆ ಮತ್ತು ವೈರಾಗ್ಯದ ಔನತ್ಯ.

ಮಸ್ತಕಾಭಿಷೇಕ ನಾಟಕದ ಪಠ್ಯವಿನ್ನೂ ಪ್ರಕಟಗೊಂಡಿಲ್ಲ. ಆದರೆ ಪಂಪನ ಪ್ರಭಾವ ಆ ನಾಟಕದ ಮೇಲೆ ದಟ್ಟವಾಗಿದೆ. ಅದಕ್ಕೆ ಕಾರಣಗಳಿವೆ; ಜಿನಸೇನನ ’ಪೂರ್ವ ಪುರಾಣ’ ದಲ್ಲಿ ಜೈನ ಧರ್ಮದ ಭವಾವಳಿಗಳನ್ನು ಹೇಳಲಷ್ಟೇ ಬರುವ ಈ ಕಥೆಯನ್ನು ಪಂಪ ವಿಸ್ತಾರವಾದ ಚಂಪೂ ಕಾವ್ಯವಾಗಿಸಿ ಜನಪ್ರಿಯಗೊಳಿಸಿದ್ದಾನೆ. ಆದಿಪುರಾಣದ ಮುಖ್ಯ ಶಿಖರಗಳೆಂದರೆ ನೀಲಾಂಜನೆಯ ನೃತ್ಯ; ಇದರಲ್ಲಿ ವ್ಯಕ್ತವಾಗುವ ಬದುಕಿನ ಕ್ಷಣ ಭಂಗುರತೆ. ಇನ್ನೊಂದು ಭರತ ದಿಗ್ವಿಜಯವನ್ನು ಮುಗಿಸಿಕೊಂಡು ವೃಷಭಾಚಲದ ಎದುರು ನಿಂತು ತನ್ನ ಕೀರ್ತಿಯನ್ನು ಕೆತ್ತಿಸಿಕೊಳ್ಳುವ ಸಂದರ್ಭದಲ್ಲಾಗುವ ಆತನ ಗರ್ವಬಂಗ. ಹಾಗೆಯೇ ಅಣ್ಣ ಭರತನನ್ನು ತಮ್ಮ ಭಾಹುಬಲಿ ಜಲಯುದ್ದ, ದೃಷ್ಟಿಯುದ್ಧಗಳಲ್ಲಿ ಸೋಲಿಸಿ ಕೊನೆಯ ಮಲ್ಲಯುದ್ಧದಲ್ಲಿ ಆತನ್ನನ್ನು ಮೇಲಕ್ಕೆ ಹಿಡಿದೆತ್ತಿ ನಿಂತಾಗ ಆತನ ಅಂತರಂಗದಲ್ಲಿ ಉಂಟಾಗುವ ಮಾನಸಿಕ ವಿಪ್ಲವ; ವೈರಾಗ್ಯದ ಅಂಕುರ-ಇವು ಆದಿಪುರಾಣದ ಹೈಲೈಟ್. ಐಶ್ವರ್ಯ, ಅಧಿಕಾರದ ಮದ ಇವುಗಳು ಅಣ್ಣ ತಮ್ಮಂದಿರನ್ನು, ತಂದೆ ಮಗನನ್ನು ಬೇರ್ಪಡಿಸುತ್ತದೆ; ಕಲಹವನ್ನು ತಂದಿಡುತ್ತದೆ, ಇಂಥ ರಾಜಶ್ರೀಯನ್ನು ತಾನು ಹೇಗೆ ಸ್ವೀಕರಿಸಲಿ ಎಂದು ವೈರಾಗ್ಯ ಹೊಂದಿ ಜೈನ ದೀಕ್ಷೆಯನ್ನು ಪಡೆಯುತ್ತಾನೆ. ಈ ಮೂರೂ ಘಟನೆಗಳು ನಾಟ್ಕದಲ್ಲಿಯೂ ಪ್ರಮುಖ ಘಟನೆಗಳೇ.

ಅದರೆ ಈ ನಾಟಕ ನಡೆಯುವುದು ನಾಟಕದೊಳಗಿನ ನಾಟಕದಲ್ಲಿ. ನಾಟ್ಕದ ಹೊರ ಆವರಣದಲ್ಲಿ ನಡೆಯುವ ನಾಟಕದ ರಿಹರ್ಸಲನಲ್ಲಿ ಅಂಬಾನಿ ಸಹೋದರರ ಕೌಟುಂಬಿಕ ಜಗಳ ಸಾಂಕೇತಿಕವಾಗಿ ಬಂದಿದೆ. ಅವರ ವ್ಯಾಜ್ಯ ಕೋರ್ಟಿನಲ್ಲಿ ಇರುವಾಗಲೇ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರನಿಗೆ ಮಹಾಮಸ್ತಕಾಭಿಷೇಕ ನಡೆಯುತ್ತದೆ. ಅದನ್ನು ಮಾಧ್ಯಮ ತನ್ನ ಟಿಅರ್ ಪಿ ಹೆಚ್ಚಳಕ್ಕೆ ಬಳಸಿಕೊಂಡರೆ. ಅಂಬಾನಿ ಸಹೋದರನೊಬ್ಬ ನಾಟಕ ನಿರ್ದೇಶಕನೊಬ್ಬನನ್ನು ಗೊತ್ತುಮಾಡಿ ಭರತ ಬಾಹುಬಲಿ ಬಗ್ಗೆ ನಾಟಕ ವಾಡಿಸುತ್ತಾನೆ. ಅವನ ರಿಹರ್ಸಲ್ ನೋಡಿದ ಯು.ಎಸ್. ಮೂಲದ ಟೀವಿ ಚಾನಲ್ಲೊಂದು ಅದರ ಟಿಲಿಕಾಸ್ಟ್ ಹಕ್ಕುಗಳನ್ನು ಪಡೆದುಕೊಳ್ಳುತ್ತದೆ.

’ಮಸ್ತಕಾಭಿಷೇಕ ರಿಹರ್ಸಲ್’ ನಾಟಕವನ್ನು ನೋಡಿದಾಗ ಅನ್ನಿಸಿದ್ದು ಈ ನಾಟಕಕ್ಕೆ ಹಲವು ಆಯಾಮಗಳಿವೆ. ಮೇಲ್ನೋಟಕ್ಕೆ ಇದು ಮಸ್ತಕಾಭಿಷೇಕ ನಾಟಕದ ರಿಹರ್ಸಲ್. ಆದರೆ ಅದರೊಳಗಡೆ ಹಲವಾರು ನೆಯ್ಗೆಗಳಿವೆ. ಯಾವ ಜೈನ ಧರ್ಮ ತ್ಯಾಗ ಮತ್ತು ವೈರಾಗ್ಯವನ್ನು ಜೀವನ ಮೌಲ್ಯವನ್ನಾಗಿ ಅಂಗೀಕರಿಸಿಕೊಂಡಿತ್ತೋ ಆ ಧರ್ಮವೀಗ ವ್ಯಾಪಾರಿಕರಣಗೊಂಡು ಮಾರುಕಟ್ಟೆಯ ಸರಕ್ಕಾಗಿ ಬದಲಾಗಿರುವುದನ್ನು ನಾಟಕ ಹೇಳುತ್ತದೆಯಾದರೂ ಇಲ್ಲಿ ಎಲ್ಲವೂ ಬಿಕರಿಗಿಟ್ಟ ವಸ್ತುಗಳೇ. ಅದು ಮಾಧ್ಯಮಗಳ ಮೇಲಾಟ, ವಿಚಾರವಾದಿಗಳ ವೈಚಾರಿಕತೆ, ಕಲಾವಿದರ ಉಡಾಫೆ. ನಾಟಕದೊಳಗಿನ ನಾಟಕ ನಿರ್ದೇಶಕನ ಆಸೆಬುರುಕತನ ಎಲ್ಲವೂ ಕೂಡಾ ಜಾಗತೀಕರಣದ ಭರಾಟೆಯಲ್ಲಿ ಬಿಕರಿಗಿಟ್ಟ ವಸ್ತುಗಳೇ.

ನಾಟಕ ಪ್ರೇಕ್ಷಕರನ್ನು ತಲುಪುವ ಬಗ್ಗೆ ಅಥವಾ ಅವರ ಗ್ರಹಿಕೆಯ ಬಗ್ಗೆ ನಿರ್ದೇಶಕರಿಗೆ ಅನುಮಾನಗಳಿರಬೇಕು ಹಾಗಾಗಿ ಅವರು ಮಸ್ತಕಾಭಿಷೇಕದ ನೇರ ಪ್ರಸಾರವನ್ನು ’ಹೀಗೂ ಉಂಟೇ’ ಶೈಲಿಯಲ್ಲಿ ನಿರೂಪಿಸಿದ್ದಾರೆ. ಆ ಶೈಲಿ ಟೀವಿ ನಿರೂಪಕರ ದಡ್ಡತನವನ್ನು ತೋರಿಸುವುದರ ಜೊತೆಗೆ ನಾಟಕದ ಗಾಂಭೀರ್ಯವನ್ನು ಮಸುಕಾಗಿಸಿತ್ತು. ಒಂದು ಒಳ್ಳೆಯ ವಿಡಂಬನಾ ನಾಟಕವಾಗಬಹುದಾದ ಸಾಧ್ಯತೆಯನ್ನು ಈ ಪಾತ್ರ ಮಸುಕಾಗಿಸಿತೇನೋ ಎಂಬ ಅನುಮಾನ ಪಡುವಷ್ಟು ಆ ಪಾತ್ರ ಮಿಂಚಿತ್ತು.

ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯೂ ತನ್ಮಯತೆಯಿಂದ ನಟಿಸಿದ್ದಾರೆ.

ತಾಂತ್ರಿಕವಾಗಿಯೂ ನಾಟಕ ಉತ್ತಮವಾಗಿ ಮೂಡಿ ಬಂದಿದೆ ಇದಕ್ಕೆ ರಂಗಪರಿಕರವನ್ನು ಒದಗಿಸಿದ ಪ್ರಮೋದ್ ಶಿಗ್ಗಾಂವ್, ಬೆಳಕು ವಿನ್ಯಾಸ ಮಾಡಿದ ಅ.ನಾ.ರಮೇಶ್ ಮತ್ತು ಮಹಾದೇವಸ್ವಾಮಿ ಹಾಗೂ ಸೆಟ್ ಸಿದ್ಧಪಡಿಸಿದ ಶಂಕರ್, ಇದಲ್ಲದೆ ಸ್ವತಃ ಸಂಗೀತ ನೀಡಿದ ನಿರ್ದೇಶಕ ಅನಗಳ್ಳಿಯವರ ಕೊಡುಗೆ ಕಾರಣವಾಗಿದೆ

ನಾಟಕದಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕದ ನೇರ ಪ್ರಸಾರದ ತುಣುಕುಗಳನ್ನು ಸಂದರ್ಭಕ್ಕೆ ತಖ್ಖಂತೆ ಬಳಸಿಕೊಳ್ಳಲಾಗಿತ್ತು. ಹಾಗಾಗಿ ಇದನ್ನು ’ಡ್ಯಾಕು ಡ್ರಾಮ’ ಎಂದು ಕರೆಯಬಹುದೆಂದು ನಿರ್ದೇಶಕರು ಹೇಳುತ್ತಾರೆ. ಅದನ್ನು ಒದಗಿಸಿದವರು ಪ್ರಸಿದ್ದ ಇತಿಹಾಸಕಾರರಾದ ಷ.ಶೆಟ್ಟರ್ ಅವರು.

ವರ್ತಮಾನದಲ್ಲಿ ಅಧಿಕಾರಕ್ಕಾಗಿ ನಡೆಯುವ ಕಚ್ಚಾಟ ಮತ್ತು ಬದುಕಿನ ಕ್ಷಣಭಂಗುರತೆ ನಾಟಕಕಾರರನ್ನು ಕಾಡಿದ್ದರೆ, ನಾಟಕ ಪ್ರಯೋಗದ ಸಂಕಷ್ಟ ಮತ್ತು ಮಾಧ್ಯಮದ ಹುಚ್ಚಾಟಗಳು ನಿರ್ದೇಶಕರನ್ನು ಕಾಡಿರಬೇಕು.ಆದರೂ ’ಮಸ್ತಕಾಭಿಷೇಕ ರಿಹರ್ಸಲ್’ ಒಂದು ರಿಹರ್ಸಲ್ ಮಾತ್ರ.ಅಂದರೆ ಮುಂದೆ ನಡೆಯಬಹುದಾದ ನಾಟಕದ ತಾಲೀಮ್ . ಹಾಗಾಗಿ ತಿದ್ದಿಕೊಳ್ಳಲು ಇನ್ನೂ ಅವಕಾಶಗಳಿವೆ ಎಂಬ ಆಶಯವನ್ನು ನಾಟಕ ಸೂಚ್ಯವಾಗಿ ಹೇಳುತ್ತದೆ. ಅದಕ್ಕೆ ಸಾಕ್ಷಿಯಾಗಿ ರಂಗದ ಕೊನೆಯಲ್ಲಿ, ಸ್ಪಾಟ್ ಲೈಟ್ ನಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿ ನಿಶ್ಚಲನಾಗಿ ನಿಂತಿರುತ್ತಾನೆ. ನಾಟಕದೊಳಗಿನ ಆ ಪಾತ್ರದಾರಿ ನಾಟಕದ ರಿಹರ್ಸಲ್ ನಲ್ಲಿ ಪಾಲ್ಗೊಳ್ಳುತ್ತಲೇ ತನಗರಿವಿಲ್ಲದಂತೆ ಬಾಹುಬಲಿಯ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ನಾಟಕದೊಳಗಿನ ನಿರ್ದೇಶಕ ಮತ್ತು ಟೀವಿ ನಿರ್ದೇಶಕನ್ನು ಧಿಕ್ಕರಿಸಿ ಬೆತ್ತಲೆಯಾಗಿ ನಿಲ್ಲುವುದು ಒಟ್ಟು ನಾಟಕದ ಆಶಯವಾಗಿದೆ.

[ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ ]


ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ :-)
ಮನಸಿನ ಮರ್ಮರ... - ಶುಕ್ರವಾರ ೦೧:೨೪, ಫೆಬ್ರುವರಿ ೩, ೨೦೧೨

ಗೋವಿಂದಾಯ ನಮಹದ ಹಾಡು “ಪ್ಯಾರಗೆ ಆಗ್-ಬಿಟ್ಟೈತೆ” ಎಲ್ಲರ ಬಾಯಲ್ಲೂ ಸುದ್ದಿಯಾಗಿದೆ… ಅದೇ ರೀತಿ ಇಂಡಿಯಾ ಟೀಮಿನ ಸ್ಥಿತಿಯೂ..ಗೋವಿಂದಾಯ ನಮಹ ಆಗಿರೋದ್ರಿಂದ ಅವ್ರ ಬಾಯಲ್ಲಿ ಈ ಹಾಡು ಬಂದ್ರೆ ಹ್ಯಾಂಗಿರುತ್ತೆ…. ನೀವೇ ನೋಡಿ…ಒಂದು ಅಣಕದ ಪ್ರಯತ್ನ ಓವರ್ ಟು ಧೋನಿ ಬಾಯ್ಸ್…. ಹಾಡು ಕೇಳ್ತಾ ಓದದಿದ್ರೆ ಅಣಕದ ಮಜ ಸಿಗೊಲ್ಲಾ..ಅದಕ್ಕೆ ಅದರ ವಿಡಿಯೋ ಇಲ್ಲಿದೆ… ಓದಿ ಖುಷಿಯಾದ್ರೆ ಹೇಳಿ…   ನಾಚಿಕೆ ಆಗ್-ಬಿಟ್ಟೈತೆ… ಓ ನಮ್ದುಕ್ಕೆ… ನಾಚಿಕೆ ಆಗ್-ಬಿಟ್ಟೈತೆ ಮ್ಯಾಚ್-ಗೆ ಸೋತ್-ಬಿಟ್ಟೈತೆ… ಓಯ್ ನಮ್ದುಕ್ಕೆ… ಮ್ಯಾಚ್-ಗೆ ಸೋತ್-ಬಿಟ್ಟೈತೆ ಮೂರು ದಿನ ಆಡ್ತಾ [...]


ಚಾರಣ ಚಿತ್ರ - ೧೬
ಅಲೆಮಾರಿಯ ಅನುಭವಗಳು - ಗುರುವಾರ ೧೧:೧೦, ಫೆಬ್ರುವರಿ ೨, ೨೦೧೨

ಪ್ರಕೃತಿ ಮತ್ತು ಅಂಬರದ ನಡುವೆ ಮೇಘ ನರ್ತನ...


ಹರಿದ ಪುಸ್ತಕ - ಭಾಗ ೩
ಸಂಪದ - Sampada - ಗುರುವಾರ ೧೦:೪೭, ಫೆಬ್ರುವರಿ ೨, ೨೦೧೨

ಎಲ್ಲರೂ ಒಂದು ರೀತಿ ವಿಚಿತ್ರವಾಗಿ ನೋಡುತ್ತಿದ್ದರು. ಎಲ್ಲೋ ತಪ್ಪು ಮಾಡುತ್ತಿದ್ದೇನ ಎಂದು ಅನಿಸಿದರೂ ಅಪ್ಪನ ಕೋಪವನ್ನು ನೆನೆಸಿಕೊಂಡು ಇದೆ ಪರವಾಗಿಲ್ಲ ಎಂದುಕೊಂಡೆ. ಎಲ್ಲಿ ಆಚೆ ಹೋದರೆ ಅಪ್ಪನ ಕೈಗೆ ಸಿಕ್ಕು ಬಿಡುತ್ತೀನೋ ಎಂಬ ಭಯದಿಂದ ಊಟ ಸಹ ಮಾಡದೆ ಅಲ್ಲೇ ಕುಳಿತಿದ್ದೆ. ಅಷ್ಟರಲ್ಲಿ ಮೇಲಿಂದ ಒಬ್ಬ ವ್ಯಕ್ತಿ ಕೆಳಗೆ ಬಂದು ನನ್ನ ಬಳಿ ಬಂದು ನೀನೆನ ಸಿನೆಮಾದಲ್ಲಿ ನಟಿಸಲು ಬಂದಿರುವುದು ಬಾ ಮೇಲೆ ನಿರ್ದೇಶಕರು ಬಂದಿದ್ದಾರೆ ನಿನ್ನನು ಕರೆಯುತ್ತಿದ್ದಾರೆ ಎಂದು ನನ್ನನ್ನು ಕರೆದುಕೊಂಡು ಕೊಠಡಿಗೆ ಕರೆದುಕೊಂಡು ಹೋದ.

 

ಮುಂದೆ ಓದಿ...


ಸಂಕೇತ
ಸಂಪದ - Sampada - ಗುರುವಾರ ೧೦:೩೮, ಫೆಬ್ರುವರಿ ೨, ೨೦೧೨

ನೂರಾರು ಸಂಕೇತಗಳು,ಸಂಜ್ಞೆಗಳು
ಅರ್ಥವಾಗದ ಭಾಷೆಗಳು
ಕಣ್ಣಿಗೆ ಕಾಣುತ್ತದೆ,ಗೋಚರಿಸುತ್ತದೆ ನಮ್ಮ ಸುತ್ತಮುತ್ತಲೂ;
ಒಳ ಅಂತರಾಳದಲ್ಲಿ ಕಾಣದ ಅರ್ಥತುಂಬಿದೆ
ಪೂರ್ತಿ ತುಂಬಿದ ಈ ಪ್ರಕೃತಿಯಲ್ಲಿ;
ನಮ್ಮ ಅರಿವೇ ಶ್ರೇಷ್ಠ;
ನಾವೇ ಶ್ರೇಷ್ಠ;
ಅಹಂಮಿನ ಸಾರೋಟದಲ್ಲಿ
ತಪ್ಪು ಭಾವನೆಗಳು ಮೇಳೈಸಿವೆ ದಿಗಂತದೆತ್ತರಕ್ಕೆ
ಹೊಸ ಹೊಸ ವಿಮರ್ಶೆಗಳ ದಾರಿ ತೆರೆದುಕೊಂಡಿದೆ;
ಸ್ಥಿತಿ-ಪರಿಸ್ಥಿತಿಗಳು ಬದಲಾಗುತ್ತಿದೆ ಗೋಚರಿಸದೇ...
ಮನಸ್ಸುಗಳೂ ಕೂಡ ಅರ್ಥವಾಗದ ಹಾಗೆ
ನಮಗೆ ಗೊತ್ತು ಬರೀ ಬಾಹ್ಯ ಬೇಕು-ಬೇಡಗಳು ಮಾತ್ರ
ಅಂತರಂಗದ ಬೇಕು-ಬೇಡಗಳು ಯಾರಿಗೆ ಗೊತ್ತು?
ಅದು ಯಾರಿಗೂ ಬೇಡ!;
ಪ್ರೀತಿ ಬೆತ್ತಲಾಗಿದೆ ಕತ್ತಲಲ್ಲಿ;
ದ್ವೇಷ ಮೇಳೈಸಿದೆ ಬೆಳಕು-ಕತ್ತಲೆನ್ನದೆ;
ಮನಸ್ಸು ಸಂಕುಚಿತಗೊಂಡಿದೆ ವ್ಯಾಮೋಹಗಳಿಂದ;
ನಿರ್ಲಿಪ್ತತೆ ಅರ್ಥಕಳೆದುಕೊಂಡಿದೆ;
ಪ್ರಕೃತಿ ತನ್ನ ಪಾಡಿಗೆ ತಾನು ಸಂಕೇತಗಳನ್ನು ಕೊಡುತ್ತಲೇ ಇದೆ;
ನಾವು ಮಾತ್ರ ಅರ್ಥಮಾಡಿಕೊಂದಿದ್ದೇವೆ ಬೇರೆಯದೇ ರೀತಿಯಲ್ಲಿ;
ಪ್ರಕೃತಿ ಸೊರಗುತ್ತಿದೆ ಸಂಕೇತ,ಸಂಜ್ಞೆಗಳನ್ನು ತೋರಿಸುತ್ತಾ...

 

ಮುಂದೆ ಓದಿ...


೧೦ ಮುಂದೆ› ಕೊನೆ»

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.